ಹಿಂದೂ ಧರ್ಮದಚಾಂದ್ರಮಾನ ಪಂಚಾಂಗದ ಎರಡನೇ ಮಾಸ.
ಈ ಮಾಸದಲ್ಲಿ ಮುಂಜಾನೆ ಎದ್ದು ಮಾಡುವ ಸ್ನಾನಕ್ಕೆ ಬಹಳ ಮಹತ್ವ ಇದೆ ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ – “ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ”, ಅಂದರೆ ವೈಶಾಖ ಸ್ನಾನ ಮಾತ್ರದಿಂದ ಈ ಭೂಮಿ ಮೇಲೆ ಮತ್ತೆ ನಡೆಯುವುದಿಲ್ಲಾ. ಅದಕ್ಕಾಗಿ ವೈಶಾಖ ಸ್ನಾನವು ಮೋಕ್ಷಕ್ಕೆ ಅತ್ಯಾವಶ್ಯಕ.
ಈ ಮಾಸದಲ್ಲಿ ವಿಶೇಷವಾಗಿ ತುಂಬಿದ ಕುಂಭವನ್ನು, ಪಾದರಕ್ಷೆ, ಛತ್ರಿ, ಬಂದ ಅತಿಥಿಗಳಿಗೆ ಉತ್ತಮವಾದ ಚಾಮರ, ತಣ್ಣೀರು, ಎಳೇ ನೀರು, ಪಾನಕ ಅನ್ನ ಇವೆ ಮೊದಲಾವುಗಳನ್ನು ದಾನ ಮಾಡಬೇಕು. ಮಂಚ, ಶಯ್ಯಾ, ಚಾಪೆ, ಕಂಬಳಿ ದಾನವು ಅಪಮೃತ್ಯು ಪರಿಹಾರ, ಅಂದರೆ ಅಕಾಲದಲ್ಲಿ ಆಗುವ ಮೃತ್ಯುವಿನ ಪರಿಹಾರವೆಂದು ಹೇಳಲಾಗಿದೆ. ಉತ್ತಮವಾದ ಶುದ್ಧ ಹತ್ತಿಯ ಬಟ್ಟೆಗಳನ್ನು ದಾನ ಮಾಡಬೇಕು. ಈ ಆಚರಣೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಬುದ್ಧಿ ಇರಬೇಕಾದದ್ದು ಬಹಳ ಅವಶ್ಯಕ
| ಚಾಂದ್ರಮಾನ ಮಾಸಗಳು |
|---|
| ಚೈತ್ರ •ವೈಶಾಖ •ಜ್ಯೇಷ್ಠ •ಆಷಾಢ •ಶ್ರಾವಣ •ಭಾದ್ರಪದ •ಆಶ್ವಯುಜ •ಕಾರ್ತಿಕ •ಮಾರ್ಗಶಿರ •ಪುಷ್ಯ •ಮಾಘ •ಫಾಲ್ಗುಣ |